ಇನ್ನೆಷ್ಟು ದಿನ ಹೀಗೆ?

ಇನ್ನೆಷ್ಟು ದಿನ ಹೀಗೆ?
ಗಾಣಕ್ಕೆ ಕಟ್ಟಿದ ಎತ್ತಿನಂತೆ
ಸುಮ್ಮನಿರುವುದು

ಗೆದ್ದಲು ಕಟ್ಟದ ಹುತ್ತದೊಳಗೆ
ಹಾವೊಂದು
ಬೆಚ್ಚಗೆ ನಿದ್ರಿಸುವುದು

ಕಾಗೆ ಇಟ್ಟ ಮೊಟ್ಟೆಗಳ ನಡುವೆ
ಕೋಗಿಲೆಯೊಂದು
ತಣ್ಣಗೆ ಮರಿಯಾಗುವುದು

ರೊಟ್ಟಿ ಕದ್ದು ಓಡಿಹೋದ ನಾಯಿಯನ್ನು
ತೋಳವೊಂದು
ಸದ್ದಿಲ್ಲದೆ ನುಂಗಿಬಿಡುವುದು

ಇನ್ನೆಷ್ಟು ದಿನ
ಮಿಸುಕಾಡದ ದೇವರುಗಳ ಮುಂದೆ
ಹರಕೆ ಹೊರುವುದು.
ಹೊಲಸು ಹಾದಿಗಳ ಮೇಲೆ
ಚಿಂದಿಯುಟ್ಟು ಉರುಳುವುದು
ತಲೆ ಬೋಳಿಸಿಕೊಳ್ಳುವುದು
ಸತ್ತ ಮೇಲೂ ಸಾಯುವುದು?

ಕಪ್ಪು ದೇಹಗಳ
ಕೆಂಪಾಗಿಸುವ ಕುಲುಮೆಯೊಳಗೆ
ಬಿದ್ದು ಬೇಯಬೇಕು
ಪಡೆಯಬೇಕು
ಹಾರೆ ಗುದ್ದಲಿಗಳ ರೂಪ
ಹರಿತ ಕೊಡಲಿಯ ಚೂಪ

ನಾವೂ ಆಡೋಣ ಒಮ್ಮೆ
ಕಾಲ್ಚೆಂಡಿನಾಟ
ರಕ್ಕಸರ ರುಂಡ ಕಡಿದು
ಮುಳ್ಳು ಬೇಲಿಯ ಕಿತ್ತು
ಕಸಗುಡಿಸಿ
ಹಸನು ಮಾಡಿದ
ಮೈದಾನದೊಳಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನು ನಾನೆಂಬ ಹಮ್ಮಿನಲಿ ಬೀಗಿ
Next post ನಮೋ ದೇವಿ ನಮೋ ತಾಯಿ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys